ಕಾಲಗರ್ಭದ ಒಳಗೆ
ಸಮಾಧಿಯಾಗಲು ಹೊರಟ
ಭೂತಕಾಲದ ಶವವ
ಮತ್ತೆ ಮತ್ತೆ ಕೆದಕುತ್ತಿರುವ
ಓ ನೀಚ ಜಂತುಗಳೇ
ನಿಮಗಿದೋ ಎಚ್ಚರಿಕೆ!
ಇದು ಸತ್ಯವ ತಿಂದು ಹಿಕ್ಕೆ ಹಾಕಿದ
ಕ್ಷುದ್ರ ಜಂತುಗಳ ತಾಣ
ಜಾತಿ ವರ್ಣಗಳ ವೇಷದಿ ಕಚ್ಚಾಡಿದ
ಹುಳ ಹುಪ್ಪಟೆಗಳ ಆವಾಸ ಸ್ಥಾನ
ಸಾಮರಸ್ಯವ ಕಲಕಿ ಜಗಕೆ
ದುರ್ಗಂಧ ಬೀರಿದ ತಾಣ
ನಿಮಗಿದೋ ಎಚ್ಚರಿಕೆ !
ಕೊಳೆತಿರುವ ಶವವ ಮತ್ತೆ ಕಬಳಿಸಬರುವ
ಬುದ್ದ್ಧಿಜೀವಿಗಳೆಂಬ ರಣ ಹದ್ದುಗಳಿವೆ
ಧರ್ಮಗುರುಗಳ ವೇಷದಿ
ಅರಾಜಕತೆಯೆಬ್ಬಿಸುವ ಕತ್ತೆಕಿರುಬಗಳಿವೆ
ತಿರುಚಿ ನರ್ತನಗೈವ
ರಾಜಕೀಯ ಪಿಶಾಚಿಗಳಿವೆ
ದುರ್ಗಂಧ ಪಸರಿಸುವ
ಸುದ್ದಿವಾಹಕಗಳ ನೀಚವ್ಯವಸ್ಥೆಯಿದೆ
ನಿಮಗಿದೋ ಎಚ್ಚರಿಕೆ !
ಸಮಾಧಿಯಾಗಿಹ ಶವಕೆ
ಮತ್ತೆ ಗಟ್ಟಿ ಮಣ್ಣನು ಮುಚ್ಚಿ
ಸಾಮರಸ್ಯದ ಬೀಜಗಳನು ಬಿತ್ತಿ
ಮಾನವತೆಯ ಹೂಗಳನು ಅರಳಿಸಿ
ಏಕತೆಯ ಸೌಗಂಧವ ಪಸರಿಸಿ
ಸಾಕಾರಗೊಳಿಸಿ ಮಾನವ ಬದುಕನು
ಜೀವನದಿ ಅನವರತ!
ಸಮಾಧಿಯಾಗಲು ಹೊರಟ
ಭೂತಕಾಲದ ಶವವ
ಮತ್ತೆ ಮತ್ತೆ ಕೆದಕುತ್ತಿರುವ
ಓ ನೀಚ ಜಂತುಗಳೇ
ನಿಮಗಿದೋ ಎಚ್ಚರಿಕೆ!
ಇದು ಸತ್ಯವ ತಿಂದು ಹಿಕ್ಕೆ ಹಾಕಿದ
ಕ್ಷುದ್ರ ಜಂತುಗಳ ತಾಣ
ಜಾತಿ ವರ್ಣಗಳ ವೇಷದಿ ಕಚ್ಚಾಡಿದ
ಹುಳ ಹುಪ್ಪಟೆಗಳ ಆವಾಸ ಸ್ಥಾನ
ಸಾಮರಸ್ಯವ ಕಲಕಿ ಜಗಕೆ
ದುರ್ಗಂಧ ಬೀರಿದ ತಾಣ
ನಿಮಗಿದೋ ಎಚ್ಚರಿಕೆ !
ಕೊಳೆತಿರುವ ಶವವ ಮತ್ತೆ ಕಬಳಿಸಬರುವ
ಬುದ್ದ್ಧಿಜೀವಿಗಳೆಂಬ ರಣ ಹದ್ದುಗಳಿವೆ
ಧರ್ಮಗುರುಗಳ ವೇಷದಿ
ಅರಾಜಕತೆಯೆಬ್ಬಿಸುವ ಕತ್ತೆಕಿರುಬಗಳಿವೆ
ತಿರುಚಿ ನರ್ತನಗೈವ
ರಾಜಕೀಯ ಪಿಶಾಚಿಗಳಿವೆ
ದುರ್ಗಂಧ ಪಸರಿಸುವ
ಸುದ್ದಿವಾಹಕಗಳ ನೀಚವ್ಯವಸ್ಥೆಯಿದೆ
ನಿಮಗಿದೋ ಎಚ್ಚರಿಕೆ !
ಸಮಾಧಿಯಾಗಿಹ ಶವಕೆ
ಮತ್ತೆ ಗಟ್ಟಿ ಮಣ್ಣನು ಮುಚ್ಚಿ
ಸಾಮರಸ್ಯದ ಬೀಜಗಳನು ಬಿತ್ತಿ
ಮಾನವತೆಯ ಹೂಗಳನು ಅರಳಿಸಿ
ಏಕತೆಯ ಸೌಗಂಧವ ಪಸರಿಸಿ
ಸಾಕಾರಗೊಳಿಸಿ ಮಾನವ ಬದುಕನು
ಜೀವನದಿ ಅನವರತ!
No comments:
Post a Comment